ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಜನರು ಸೇರಿ ಮಹಿಳೆ ಮೇಲೆ ಹಲ್ಲೆ ಮಾಡಿ ಹಿಡಿದು ಎಳೆದಾಡಿ ಗಾಯಗೊಳಿಸಿರುವ ಘಟನೆ ಗುಡ್ಡದ ರಂಗವ್ವನಹಳ್ಳಿಯಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಗುಡ್ಡದ ರಂಗವ್ವನಹಳ್ಳಿಯಲ್ಲಿ ಶಿವರಾಜೇಶ್ವರಿ ಎಂಬ ಮಹಿಳೆಯು ಜಮೀನಿನಲ್ಲಿ ಕೆಲಸ ಮಾಡುವಾಗ ವಿಶ್ವನಾಥ, ತಿಪ್ಪೇರುದ್ರಪ್ಪ, ಕೊಟ್ರ ಬಸಪ್ಪ, ಮಹಂತೇಶ ತಿಪ್ಪಯ್ಯ ಎನ್ನುವ ಇವರು ಮಹಿಳೆಯನ್ನು ಕುತ್ತಿಗೆ ಹಿಡಿದು ಎಳೆದಾಡಿ, ಬಟ್ಟೆಯನ್ನು ಹಿಡಿದು ಜಗ್ಗಾಡಿ, ಕೆಳಗೆ ಬೀಳಿಸಿಕೊಂಡು ಕಾಲಿನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಈಜಗಳವನ್ನು ಬಿಡಿಸಲು ಬಂದ ಲಿಂಗೇಶನಿಗೆ ಕೊಟ್ರಬಸಪ್ಪ ಮತ್ತು ಮಹಂತೇಶ ಇಬ್ಬರು ಹಲ್ಲೆ ಮಾಡಿದ್ದು, ಅಲ್ಲಿಗೆ ಸುಮ್ಮನಾಗದೆವಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಶಿವರಾಜೇಶ್ವರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.